ವಿಷಯಕ್ಕೆ ಹೋಗು

ಪುಟ:ಕಯ್ಯಾರೆರ್ನ ಕಬಿತೆಲು.pdf/೮೪

ವಿಕಿಸೋರ್ಸ್ರ್ದ್
ಈ ಪುಟೊನು ಪ್ರಕಟಿಸದ್ ಆಂಡ್

 
       ಸಿರಿಪಟ್ಟವನೇರಿದ ನೆಲದಲ್ಲಿ,
       ನರಿಗಳು ನಾಯಿಗಳೋಡುತಿವೆ;
       ಸಿರಿವಂತರು ಬಾಳಿದ ಮನೆಯಲ್ಲಿ,
       ಹಾವು ಹೆಗ್ಗಣವು ಕೂಡುತಿವೆ.

       ಅಂದಿನ ಸಂಭ್ರಮ ವಿಪುಲವೈಭವಗ-
       ಳಿಂದಿಗದೆಲ್ಲವು ಬರಿ ಕನಸು!
       ಹಿಂದಿನ ವೀರರ ಕತೆಗಳ ನೆನೆದೇ
       ಕಂಬನಿ ಸುರಿಸುತಲೆದೆತಣಿಸು!

       ದೇಶವು ಭಾಷೆಯು ನಮ್ಮದಿದೆಂದು
       ಹಿಗ್ಗುವ ಕಾಲದಿ ಜನರೆಲ್ಲ;
       ಈ ನಾಡಿನ ಮಂದಿಯ ಹಣೆಯಲ್ಲಿ
       ಆ ಭಾಗ್ಯವ ವಿಧಿ ಬರೆದಿಲ್ಲ.

ಕಯ್ಯಾರೆಡ್ನ ಕಬಿತೆಲು / 71