ಈ ಪುಟೊನು ಪ್ರಕಟಿಸದ್ ಆಂಡ್
ಗೆರೆ ತಪ್ಪದಿರೆ ಬರೆವೆ
ಅರ್ಧ ಶತಮಾನ ದಾಂಟುತ ಬಂತು ಜೀವನದಿ;
ಕಾಲು ಕೆಸರಲಿ, ಮಿಕ್ಕ ಕಾಲು ಮರಳಿನಲಿ;
ಅಡಿಮೆ ಹೊಲೆ ಕೊಳೆಯಾಯಿತಾಯುಸ್ಸಿನರೆ ಬದುಕು
ಬಿಡುಗಡೆಯ ಬೇಗೆಗೆ ನಿವೃತ್ತಿ ಹುಡುಕು.
ಅಂದಿಗೂ ಶ್ರಮವೆ ದೈವತವೆಂದು ನೆರೆನಂಬಿ
ನಿಂದವನು, ಮೇಣದರ ಬಲದೆ ಬದುಕಿದೆನು;
ಇಂದಿಗೂ ದುಡಿತವೊಂದೇ ಹಿಡಿತವೀ ಬಾಳ
ಹಂದರಕ್ಕಾಧಾರವೆಂದೆ ಬಿಡದಿಹೆನು.
ನೇಗಿಲಿನ ಸಮಕೆ ಲೇಖನಿ ಹಿಡಿದ ಕಯ್ಯಲ್ಲಿ
ಗೆರೆ ತಪ್ಪದಿರೆ ಬರೆವೆ ಭೂಪಟದಿ, ಪುಟದಿ;
ತಲೆಯ ತೂಗಿತು ತೆನೆಯ ಭಾರದಲಿ ನವಶಾಲಿ,
ಅರಳಿ ಬಂದಿತೊ ಕವಿತೆ, ಹೊಸತು ಸಂಪುಟದಿ.
ಮೆಚ್ಚುಗೆಯೂ ಚುಚ್ಚುಗೆಯೊ ಬಂದದ್ದು ಬರಲಿ;
ನೇಗಿಲಿನ ಜತೆಗೆ ಲೇಖನಿ ಕಯ್ಯೊಳಿರಲಿ.
ಕಯ್ಯಾರೆರ್ನ ಕಬಿತೆಲು / 72