ವಿಷಯಕ್ಕೆ ಹೋಗು

ಪುಟ:ಕಯ್ಯಾರೆರ್ನ ಕಬಿತೆಲು.pdf/೮೨

ವಿಕಿಸೋರ್ಸ್ರ್ದ್
ಈ ಪುಟೊನು ಪ್ರಕಟಿಸದ್ ಆಂಡ್

ಬೆಣ್ಣೆ ಬರುತಿರೆ ಮಂತು ಮುರಿಯಿತೆ?
ನಿನ್ನ ನೆಲ ಹೊರಗುಳಿಯಿತೆ?
ಹಂತ ಗೂಬೆಯ ಗುಂಪು ಗಿಳಿಗಳ
ಹಿಂಡ ಚೆದರಿಸಿ ಹೋಯಿತೆ?

ಪುಣ್ಯಸ್ಮರಣೆಗೆ ಕವನ ಪುಷ್ಪವ
ಅರ್ಪಿಸುವ‌ರೈ ಕವಿಗಳು;
ಆನು ಕಣ್ಣೀರ್ತುಂಬಿ ತಂದಿಹೆ,
ಬಾಷ್ಪ ಬಂಧುವೆ, ಕೈಕೊಳು.

ಶೋಕವೇ ಶ್ಲೋಕತ್ವ ಪಡೆಯಿತು
ಎನ್ನ ಹೃದಯದ ರಂಗದಿ,
ಕಾವ್ಯಕೌಮುದಿ ಕ್ಷೀರಸಿಂಚನ
ನಿನ್ನ ಹರಕೆಯ ಸಂಗದಿ,



ಕಯ್ಯಾರೆರ್ನ ಕಬಿತೆಲು / 69