ವಿಷಯಕ್ಕೆ ಹೋಗು

ಪುಟ:ಕಯ್ಯಾರೆರ್ನ ಕಬಿತೆಲು.pdf/೭೯

ವಿಕಿಸೋರ್ಸ್ರ್ದ್
ಈ ಪುಟೊನು ಪ್ರಕಟಿಸದ್ ಆಂಡ್

ರಾಷ್ಟ್ರಕವಿ

ಉನ್ನತೋನ್ನತ ಪಶ್ಚಿಮಾದ್ರಿಯು
ಬೆನ್ನ ಹಿಂದಕೆ ನಿಂತಿದೆ,
ಅಳೆಯಲಾರದ ಆಳದಗಲದ
ನೀಲಜಲಧಿಯು ಮುಂತಿದೆ.

ಅತ್ತ ಗಜಶಾರ್ದೂಲ ಗರ್ಜನೆ
ಇತ್ತ ಪೆರ್ದೆರೆ ಮೊರೆತವು
ಇಂಥ ಮೇಳವು ರಾಗತಾಳವು
ನಿನ್ನ ಸ್ಫೂರ್ತಿಗೆ ದೊರೆತವು.

ಗಂಧವತಿ ಈ ಪೃಥ್ವಿ, ಕಳಮೆಯ
ಕಂಪು ಹೊಲ ಸಿರಿಮಂಚವು,
ತೆಂಗುಕಂಗಿನ ತೋಟ ತಲೆಯನು
ತೂಗುತಿರೆ ರೋಮಾಂಚವು.

ಭೂತ ನರ್ತನ, ದುಡಿಯ ವಾದನ,
ಯಕ್ಷಗಾನವು ಪಾಡ್ದನ;
ನದಿ ನಿನಾದವು ಪಕ್ಷಿಕೂಜನ
ನಿನ್ನ ಪ್ರತಿಭೆಗೆ ಸಾಧನ.

ಕರುಣೆಯಿಂ ಕವಿತಾವತಾರವು
ನಿನಗೆ ವಾಲ್ಮೀಕಿಯ ತೆರ,
ದೇವಪುತ್ರನ ಶಿಲುಬೆಗಿಕ್ಕಿದ
ನೋವು, ಗೋಲ್ಗೊಥದಾಕರ;

ವೇಶ್ಯ ವಾಸವದತ್ತೆ ಮಸಣದಿ
ಬುದ್ಧ ಭಿಕ್ಷುವನೀಕ್ಷಿಸಿ,
ಕವಷ ಶೂದ್ರರ್ಷಿಯ ಮಹಾ
ದಾಹಕ್ಕೆ ಸೂಕ್ತವು ಸಾಕ್ಷಿಸೆ

ಉತ್ತಮರ ನೀಚತ್ವ ಪ್ರಕಟಿತ
ಹೆಬ್ಬೆರಳ ಬಲಿದಾನದಿ;
ತಂಗಿಯಾದಳು ಸುಗತಗಾ
ಮಾತಂಗಿ ನಿರ್ಮಲ ಹೃದಯದಿ;

ಕಯ್ಯಾರೆರ್ನ ಕಬಿತೆಲು / 66