ವಿಷಯಕ್ಕೆ ಹೋಗು

ಪುಟ:ಕಯ್ಯಾರೆರ್ನ ಕಬಿತೆಲು.pdf/೭೮

ವಿಕಿಸೋರ್ಸ್ರ್ದ್
ಈ ಪುಟೊನು ಪ್ರಕಟಿಸದ್ ಆಂಡ್

     ಭಾರತಕೆ ದಣ್ಣಾಯಕರನಿತ್ತ ವೀರಸೂ
     ಅಮ್ಮೆ ಕಾವೇರಿ ಹರಸಿದ ನಾಡನು;
     ಕನ್ನಡದ ಕಾಶ್ಮೀರ ಕೊಡಗು ಭೂರಮೆ ಸೊಬಗು
     ಹಿಗ್ಗಿ ಹಾಡಿದೆ ಹುತ್ತರಿಯ ಹಾಡನು;

     ನೀ ಕವನ ಗಾರುಡಿಗ, ಬಾಗಿಲಿನ ಬಿಲದೊಳಿಹ
     ಹಾವ ತಲೆದೂಗಿಸಿದೆ ಹೂವಿನಂತೆ;
     ರವಿ ಮೂಡುವನು, ಚಂದ್ರ ತೇಲುವನು, ನಕ್ಷತ್ರ
     ಮಿನುಗುವುವು _ಕವಿ ಮಂತ್ರವಾದಿಯಂತೆ!

     ನಿನ್ನ ವಿಕ್ರಮ ಹಲವು, ನಿನಗೆ ಪ್ರಥಮದ ಗೆಲುವು,
     ಸಣ್ಣಕತೆಗಳ ಜನಕ, ಶಿಶುಗೀತೆ ತಾತ;
     ನೀ ಹರಟೆಮಲ್ಲ ಮಾತಿಗೆ ಮಧುವ ಲೇಪಿಸಿದೆ
     ಹಾಸ್ಯಪ್ರಬಂಧದಿ, ನವೋದಯದ ವಿಧಾತ.

     ಬಂಧು ನೀ ಬೆನಗಲಗೆ, ಸನ್ಮಿತ್ರ ಮುದ್ದಣಗೆ,
     ಸಂಗಾತಿ ಕಾಮತಗೆ, ರಾಷ್ಟ್ರಕವಿಗೆ ಗುರು;
     ಕಾವೇರಿಯಿಂದ ಗೋದಾವರಿಯ ವರಮಿರ್ಪ
     ಕನ್ನಡದ ಕುಲಕೋಟಿ ಎಲ್ಲ ನಿನ್ನವರು!

     ***
     ಒಬ್ಬನೇ ಪಂಜೆ, ಒಬ್ಬ ಮುದ್ದಣ
     ಒಬ್ಬ ರತ್ನಾಕರಣ್ಣ;
     ಒಬ್ಬ ಪೈ ಮತ್ತೆ, ಇಬ್ಬರಿಲ್ಲವಂತೆ
     ಹೋಲ್ವರಾರು ಇವರನ್ನ?

     ***
     ಬಂಜೆಯಲ್ಲ- ತುಳುತಾಯಿ ಪಡೆದಳು,
     ಪಂಜೆಯಂಥ ಪುತ್ರರನು;
     ಕಂಡರಲ್ಲ-ಪಾಲ್ಗಡಲಿನೊಡಲೊಳು,
     ಹರಿಯ ಹೃದಯರತ್ನವನು

ಕಯ್ಯಾರೆರ ಕಬಿತೆಲು / 65