ಈ ಪುಟೊನು ಪ್ರಕಟಿಸದ್ ಆಂಡ್
ಪರವಪಂಬದರ ನಲಿವ ನಲಿಕೆಯರ
ದುಡಿಯ ಪಾಡ್ದನಗಳಲ್ಲಿ
ಭೂತ ಕೋಲ ನೇಮವು ನಡಾವಳಿ
ನಡೆಯುತಿರುವ ನೆಲದಲ್ಲಿ
ತುಳುವ ಸಂಸ್ಕೃತಿಯ ಸಾರ ಹೀರುತ
ರಾಯ ಮಂಗೇಶ ಬಳೆದ;
ಕಲಿತ ಕನ್ನಡದಿ ಕವಿತೆ ಕಟ್ಟುತ
ಹೆಸರು ಕವಿಶಿಷ್ಯ ತಳೆದ.
ಪಡುವಣದ ಗಾಳಿ ಬೀಸುತ ಬಂತು ತಾಯ್ನೆಲಕೆ,
ವಿಷವುಂಡು ಕೊನೆಗೆ ಸೊದೆಗೆಳಸಿದಂತೆ;
ಅಡಿಮೆಸಂಕಲೆ ಬಿಗಿಯೆ ಜನತೆಗಾಯ್ಕೆಚ್ಚರಿಕೆ,
ಬಿಡುಗಡೆಯ ನೇಸರುದಯವ ಕಾಂಬ ಚಿಂತೆ.
ಎಚ್ಚರೆಚ್ಚರವಾಯ್ತು ಕೇಳಿತ್ತುಷಾಸೂಕ್ತಿ
ಕುಲಕೋಟಿ ಕಲಕಂಠ ಕೂಡಿಹಾಡಿ,
ನಮ್ಮ ತಾಯ್ನಾಡೆಂಬ ನಮ್ಮ ತಾಯ್ನುಡಿಯೆಂಬ
ಅಭಿಮಾನವನು ಮೆರೆದ ಮೋಡಿನೋಡಿ;
ಆ ನವೋದಯದ ಕನ್ನಡಕುಲಕೆ ಮಂತ್ರಿಸಿದ
ಋಷಿಚೇತನವು ಪಂಜೆ ಮಂಗೇಶರಾಯ;
ಏನು ದಿವ್ಯ ಸ್ಪೂರ್ತಿ! ನಿನಗೆ ಸಂದಿದೆ ಕೀರ್ತಿ
ನೀ ನಡೆದ ಹಾದಿಯನು ಹಿಡಿದೆವಯ್ಯ.
ಸೀಮೆ ಕೊಂಕಣದ ತೆಂಕಣಗಾಳಿಯಾಟವನು
ಹಾಡಿ ಕವನದ ಚಿತ್ರ ಮೋಡಿ ಮೆರೆದೆ;
ಎರೆದೆ ತುಳು ಪಾಡ್ದನದ ರಸದ ಸವಿಯೂಟವನು
ಅಮರಕಥೆ ಕೋಟಿಚೆನ್ನಯವ ನಮಗೊರೆದೆ.
ಕಯ್ಯಾರೆರ್ನ ಕಬಿತೆಲು / 64