ವಿಷಯಕ್ಕೆ ಹೋಗು

ಪುಟ:ಕಯ್ಯಾರೆರ್ನ ಕಬಿತೆಲು.pdf/೭೬

ವಿಕಿಸೋರ್ಸ್ರ್ದ್
ಈ ಪುಟೊನು ಪ್ರಕಟಿಸದ್ ಆಂಡ್

ನವೋದಯದ ಋಷಿ

ಬಂಜೆಯಲ್ಲ – ತುಳುತಾಯಿ ಪಡೆದಳು
ಪಂಜೆಯಂಥ ಪುತ್ರರನು;
ಕಂಡರಲ್ಲ, ಪಾಲ್ಗಡಲಿನೊಡಲೊಳು
ಹರಿಯ ಹೃದಯರತ್ನವನು.

ಬಂಟನಾವನೋ ಬಾಳುತ್ತಿದ್ದನು
ಬದುಕ ಬೆಳಗಿಸಿದನೇನು?
ಬಂಟವಾಳವೆನೆ ಹೆಸರು ಮೆರೆದಿದೆ
ಅಲ್ಲೆ-ಪಂಜೆ ಜನಿಸಿದನು.

ತಾಯಿ ಸೀತಮ್ಮ, ತಂದೆ ರಾಮಪ್ಪ,
ಇಳಿದುಬಂದರೋ ಇಳೆಗೆ;
ಮಗುವೆ ಕಣ್ಗೊಂಬೆ,ನಗುವೆ ಮೈತುಂಬೆ
ಬಣ್ಣ ಮೈನಿಂಬೆ ಬೆಳಗೆ !

ಶರಧಿ ಸಹ್ಯಾದ್ರಿ ಮಧ್ಯೆ ಶಾಲಿನಿಧಿ;
ಆಳ ಉನ್ನತಿ ವಿಶಾಲ;
ಇಂಥ ತೊಟ್ಟಿಲಲಿ ತಾಯಿ ಜೋಗುಳಿಸೆ
ಕನಸು ಕಂಡ ಕವಿ ಬಾಲ,

ಗದ್ದೆ ಕಳಮೆಗಳ ಬಳಸಿ ಕೇಳಿದನು
ನೇಜಿ ಹಾಡು-ಓ ಬೇಲೇ!
ನಿದ್ದೆಬಿಟ್ಟು ಬಯಲಾಟ ನೋಡಿದನು
ಧಿಮಿತ ಧೀಂಕಿಟದ ಲೀಲೆ

ಹರಿಯುತಿಹುದು ನದಿ ನಾದ ಕಲಕಲದಿ
ಜಲಧಿ ಘೋಷಕದೆ ಶ್ರುತಿಯು;
ಇದನು ಆಲಿಸುತ ಹೃದಯ ತೇಲಿಸುತ
ಮಯ್ಯ ಮರೆವ ಸಂಗತಿಯು.

ಕಯ್ಯಾರೆರ್ನ ಕಬಿತೆಲು / 63