ಈ ಪುಟೊನು ಪ್ರಕಟಿಸದ್ ಆಂಡ್
ನವೋದಯದ ಋಷಿ
ಬಂಜೆಯಲ್ಲ – ತುಳುತಾಯಿ ಪಡೆದಳು
ಪಂಜೆಯಂಥ ಪುತ್ರರನು;
ಕಂಡರಲ್ಲ, ಪಾಲ್ಗಡಲಿನೊಡಲೊಳು
ಹರಿಯ ಹೃದಯರತ್ನವನು.
ಬಂಟನಾವನೋ ಬಾಳುತ್ತಿದ್ದನು
ಬದುಕ ಬೆಳಗಿಸಿದನೇನು?
ಬಂಟವಾಳವೆನೆ ಹೆಸರು ಮೆರೆದಿದೆ
ಅಲ್ಲೆ-ಪಂಜೆ ಜನಿಸಿದನು.
ತಾಯಿ ಸೀತಮ್ಮ, ತಂದೆ ರಾಮಪ್ಪ,
ಇಳಿದುಬಂದರೋ ಇಳೆಗೆ;
ಮಗುವೆ ಕಣ್ಗೊಂಬೆ,ನಗುವೆ ಮೈತುಂಬೆ
ಬಣ್ಣ ಮೈನಿಂಬೆ ಬೆಳಗೆ !
ಶರಧಿ ಸಹ್ಯಾದ್ರಿ ಮಧ್ಯೆ ಶಾಲಿನಿಧಿ;
ಆಳ ಉನ್ನತಿ ವಿಶಾಲ;
ಇಂಥ ತೊಟ್ಟಿಲಲಿ ತಾಯಿ ಜೋಗುಳಿಸೆ
ಕನಸು ಕಂಡ ಕವಿ ಬಾಲ,
ಗದ್ದೆ ಕಳಮೆಗಳ ಬಳಸಿ ಕೇಳಿದನು
ನೇಜಿ ಹಾಡು-ಓ ಬೇಲೇ!
ನಿದ್ದೆಬಿಟ್ಟು ಬಯಲಾಟ ನೋಡಿದನು
ಧಿಮಿತ ಧೀಂಕಿಟದ ಲೀಲೆ
ಹರಿಯುತಿಹುದು ನದಿ ನಾದ ಕಲಕಲದಿ
ಜಲಧಿ ಘೋಷಕದೆ ಶ್ರುತಿಯು;
ಇದನು ಆಲಿಸುತ ಹೃದಯ ತೇಲಿಸುತ
ಮಯ್ಯ ಮರೆವ ಸಂಗತಿಯು.
ಕಯ್ಯಾರೆರ್ನ ಕಬಿತೆಲು / 63