ವಿಷಯಕ್ಕೆ ಹೋಗು

ಪುಟ:ಕಯ್ಯಾರೆರ್ನ ಕಬಿತೆಲು.pdf/೬೬

ವಿಕಿಸೋರ್ಸ್ರ್ದ್
ಈ ಪುಟೊನು ಪ್ರಕಟಿಸದ್ ಆಂಡ್

       ಸರಸಿಜಮುಖಿಯೆಂದೇಕೆ
       ಬಣ್ಣಿಪೆಯೇ ಕವಿ? ಜೋಕೆ,
       ಕನಸು ಮನಸಿಗದು ಬಯಕೆ
       ಸುಂದರ ಸಂಗ್ರಹ ಸಾಕೆ?|| 8 ||

       ಕೆಸರಿನ ಬಸುರಿಂದೆದ್ದು
       ಕಂಟಕ ಕಾಯದೊಳಿದ್ದು
       ಹೂವದಿರುಳು ಹುದುಗಿರದೆ?
       ನಿನಗೆ ನೀನೆ ಸರಿ ಮುಗುದೆ || 9 ||

       ಸತ್ಯ ಸುಂದರಕೆ ಬೆರೆತ
       ನಿತ್ಯ ನಿರ್ಮಲತೆಯರಿತ
       ಪ್ರೇಮ ಪೂರ್ಣಿಮೆಗೆ ಬಲಿದ
       ಮೈಯ ಕಟ್ಟು ಬಿಗಿ ಬಿನದ || 10 ||

       ಶಾಂತಿ ನೀತಿ ನಯಲೋಕ –
       ದಲ್ಲಿ ನೀನೆಯಧಿರಾಣಿ
       ಕಾಂತಿಕಲೆಯ ಕಟ್ಟೆರಕ
       ಸೊಲ್ಲಿಸುತಿಹೆ ರಸರಾಣಿ || 11 ||

       ಕುದುರೆಮುಖದ ತುದಿಯೇರಿ
       ಇಳಿದು ಬಯಲ ಬಳಿ ಹಾರಿ
       ನೇತ್ರಾವತಿಯಲಿ ಮಿಂದು
       ಮಂಗಳೂರಿನಲ್ಲಿ ನಿಂದು - || 12 ||

       ಸಾಗರಸಂಭವಶ್ರುತಿಗೆ
       ರಾಗವ ಜೋಡಿಸು ಜತೆಗೆ;
       ನೆಲ ನಲಿಯಲಿ ತನಿತಾನ !
       ಗಾನ ನಿನಗೆ ವರದಾನ || 13 ||

       ಮಕ್ಕಳ ಮುದ್ದಿಸುವಂದು
       ಜೋ ಜೋ - ಜೋಗುಳವೆಂದು,
       ಕನ್ನಡ ಕವಿಗಳಿಗಂದು
       ನೀ ಕಲಿಸಿಹುದಹುದೆಂದು –|| 14 ||

ಕಯ್ಯಾರೆರ ಕಬಿತೆಲು / 53