ವಿಷಯಕ್ಕೆ ಹೋಗು

ಪುಟ:ಕಯ್ಯಾರೆರ್ನ ಕಬಿತೆಲು.pdf/೭೩

ವಿಕಿಸೋರ್ಸ್ರ್ದ್
ಈ ಪುಟೊನು ಪ್ರಕಟಿಸದ್ ಆಂಡ್

ಓಟ ಕಂಬಳದಿ ಬೇಟೆ ಹಂಬಲದಿ
ಆಟ ದೊಂದಿಯಾರ್ಭಟವು

ಅಲ್ಲಿ-ದೇಗುಲದಿ ಗಂಟೆ ಮೊಳಗಿತು
ಅವನೋ ಮಾಲೆಗಾರ;
ನಿಲ್ಲು-ದೇವರಾರತಿಯು ಬೆಳಗಿತು
ಬಾಗಿ ಬಕುತಿ ತೋರ

ಹಗಲು ರಾತ್ರಿಯಿದೆ ಜಾತ್ರೆಯಾಗಿದೆ
ತುಳುವ ನಾಡಿನಲ್ಲಿ;
ರಸದ ರಥದ ಯಾತ್ರೆಯಲಿ ಸಾಗಿದೆ
ಜನತೆ ಜತೆಯೊಳಿಲ್ಲಿ.

ನವನವೋನ್ವೇಷ ತುಂಬಿದಾವೇಶ
ನಿಜ ನಿಸರ್ಗದಾಟ;
ವೀರ ಶೃಂಗಾರ ಹಾಸ್ಯ ಕಾರುಣ್ಯ
ರಸದ ರುಚಿಯ ಊಟ.

ಬಾಳ ಬವಣೆಯನು ಮರೆತೆ ಹಾಡಿದನು
ಮುದ್ದು ಮುದ್ದು ಮನಕೆ;
ಉಪ್ಪುನೀರನೇ ಹೀರಿ ಬೆಳೆದ ಸಸಿ
ಕಲ್ಪವೃಕ್ಷ ಜನಕೆ

3

ಬಡವು ಬೆಂಕಿಯಲ್ಲಿ ಒಡಲು ಬೆಂದಾಗ
ನೋವೆ ಕಾವ್ಯವೆಂದೆ;
ಮಡದಿ ಮೆಚ್ಚುಗೆಯ ಕೊಡಲು ಬಂದಾಗ
ಜೀವ ದಿವ್ಯವಂದೆ

ದೇಹ ಶ್ರೀಗಂಧ ಕೊರಡು ಸವೆಯಿತೋ
ಕ್ಷೀಣ ಕ್ಷೀಣವಾಗಿ;
ಭಾವ ಪರಿಮಳದ ಕಾವ್ಯವರಳಿತೋ
ನೂರು ದಳವೆ ಆಗಿ

ಕಯ್ಯಾರೆರ್ನ ಕಬಿತೆಲು / 60