ವಿಷಯಕ್ಕೆ ಹೋಗು

ಪುಟ:ಕಯ್ಯಾರೆರ್ನ ಕಬಿತೆಲು.pdf/೫೮

ವಿಕಿಸೋರ್ಸ್ರ್ದ್
ಈ ಪುಟೊನು ಪ್ರಕಟಿಸದ್ ಆಂಡ್

     ನಯವತಿ – ಸತ್ಯವತಿಯು, ಪತಿ ಸುತರೊಡ-
     ಗೂಡುತ ಬಂದಳು, ಗುಣವಂತೆ

     ಸೇವಕರೆಂದರು, ಮನೆಯವರೆಂದರು,
     ಸೋದರ ಕೊರಗುವ ಕಾರಣವ
     ತೆರದಲಿ, ಸಲಿಸದೆ ನರಬಲಿ
     ಹಾಸಿಗೆ ಹಿಡಿದಿಹನೆಂದರು

     ತನ್ನೊಡಹುಟ್ಟಿದ ಸೋದರ ಹೃದಯವು
     ಮರುಗುತಲಿರುವುದ ನೋಡಿದಳು;
     ತನ್ನೊಡಲಿನ ಮಿದು ಕರುಳೇ ಕರಗಿತು!
     ಅಣ್ಣಗೆ ಬಿನ್ನಹ ಮಾಡಿದಳು -

     “ಏಳೆನ್ನಗ್ರಜ! ನೀನಿದಕೀಪರಿ
     ಮರುಗಲು ಬೇಕೇ? ಬಿಡು ಚಿಂತೆ,
     ಕೇಳೆನ್ನಯ ಮಗನನು ನಾನೀವೆನು,
     ಭೂತಕೆ ನರಬಲಿ ಸಲುವಂತೆ.”

     ಸವಿಜೇನಿನ ಮಳೆ ಸುರಿದಂತಾಯಿತು
     ತಂಗಿಯ ನುಡಿಗಳಿವನು ಕೇಳಿ!
     ಬುವಿಯಲಿ ನಮ್ಮೊಡಹುಟ್ಟುಗಳಲ್ಲವೆ
     ಕಷ್ಟಕೊದಗುವರು ನಿತ್ಯದಲಿ?

     “ನನ್ನೀ ಕಾರ್ಯಕೆ ನನ್ನಯ ಸುತರನೆ
     ಕೈಹಿಡಿದಾಕೆಯು ಕೊಡಲಿಲ್ಲ!
     ನಿನ್ನೊಬ್ಬನೆ ಮಗನಿವನನು ನೀಡುವೆ !
     ಭಾವ ಕೋಪಿಸನೆ? ಇದು ಸಲ್ಲ!”

     “ನಮ್ಮೊಳು ಭೇದಗಳಿತ್ತೇ ಸುಖದಲಿ?
     ದುಃಖದಿ ತೊಲಗುವೆವೇ ಹೇಳು?
     ಸಮ್ಮತಿ ಪಡೆದೇ ಬಂದಿಹೆ ಸೋದರ,
     ಉಮ್ಮಳವನು ಬಿಡು ಬೇಗೇಳು”

     4
     ಸತ್ಯವತಿಯು ತನ್ನಯ ಸುತ ಜಯನನು
     ಮೀಯಿಸಿ ತಂದಳು ಶುಚಿಯಾಗಿ;

ಕಯ್ಯಾರೆರ್ನ ಕಬಿತೆಲು / 45