ಭೂತಾಳಪಾಂಡ್ಯ
ಸಾವಿರ ವರ್ಷದ ಹಿಂದಕೆ ನಡೆಯಿತು
ಕತೆಯೊಂದನು ಹೇಳುವೆ ಕಂದ;
ಯಾವನ ಕಾಲದಿ, ಯಾತಕೆ ಹುಟ್ಟಿತು,
ಅಳಿಯಕಟ್ಟೆನುತ – ತಿಳಿ ಚಂದ.
ಪಾಂಡ್ಯದೇಶದಲ್ಲಿ ವರ್ತಕನಿದ್ದನು
ದೇವಪಾಂಡ್ಯ ಬಲು ಸಿರಿವಂತ;
ತಂಡತಂಡದಲಿ ಹಡಗವ ಸಾಗಿಸಿ
ದುಡ್ಡು ಗಳಿಸಿದನು ಗುಣವಂತ
ಮನ್ನಣೆ ಸಂಪದವೆಲ್ಲವು ಹೆಚ್ಚಿತು
ವ್ಯಾಪಾರದಿ ಗೆಲವಾಗುತಿರೆ;
ಸಣ್ಣ ಹಡಗಗಳು ಸಾಲದೆ ಹೋಗಲು
ದೊಡ್ಡದು ಕಟ್ಟಿಸೆ ಮನತೋರೆ –
ಮರಗಳ ತರಿಸಿದ ಶಿಲ್ಪಿಯ ಕರೆಸಿದ
ಕೂಲಿಗಳೆಲ್ಲರ ಕೂಡಿಸಿದ;
ಭರದಲಿ ಹಡಗದ ಕೆಲಸವ ಮುಗಿಸಿದ,
ವೆಚ್ಚವ ಗಣಿಸದೆ ಮಾಡಿಸಿದ.
2
ಕೇಳಿ ಮುಹೂರ್ತವ ಜೋಯಿಸರಲ್ಲಿಯೆ
ದಿನ ತಿಥಿಯೆಲ್ಲವು ಶುಭವಿರಲು,
ತಾಳುತ ಸಂಭ್ರಮ, ಸಂತಸದಲ್ಲಿಯೆ,
ನೀರಿಗೆ ಹಡಗವನಿಳಿಸಿರಲು -
ಆಹಾ! ಅಚ್ಚರಿ! ಏನದು ಶಬ್ದವು?
ಕೇಳಿದರೆಲ್ಲರು ನಡನಡುಗಿ !
“ಓಹೋ! ನಿಲ್ಲಲಿ! ನರಬಲಿ ಸಲ್ಲಲಿ!”
ದನಿಯೊಂದೆದ್ದಿತು! ಗುಡು ಗುಡುಗಿ!
ಸಿಡಿಲೇ ಹೊಡೆದಂತಾಯಿತು ಪಾಂಡ್ಯಗೆ,
“ಬಲಿಯನು ಕೊಡುವುದೆ ಯಾರನ್ನು?
ಕಯ್ಯಾರೆರ್ನ ಕಬಿತೆಲು / 43